ಇತ್ತೀಚಿಗೆ ರೇಲ್ವೆಯಲ್ಲಿ ಖಾಲಿಯಿದ್ದ ೪೭೦೧ ‘ಡಿ’ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಹಿಂದಿ ಭಾಷಿಕರನ್ನು ತುಂಬುವ ಹುನ್ನಾರ ನಡೆಸುತ್ತಿದ್ದುದ್ದನ್ನು ವಿರೋಧಿಸಿ ನಾಡಿನಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆಯು ನಡೆಸುತ್ತಿದ್ದ ಹೋರಾಟದಿಂದ ಕಂಗೆಟ್ಟು ರೇಲ್ವೆ ಇಲಾಖೆ ನೇಮಕಾತಿಯನ್ನು ಮುಂದೂಡುವ ಕುತಂತ್ರ ನಡೆಸಿತು. ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಕರವೇ ನಡೆಸಿದ ಹೊರಾಟಗಳ ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ನೋಡಿ-
ರೈಲ್ವೆ ವಲಯದಲ್ಲಿ ಕನ್ನಡಿಗರಿಗೆ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ನಿರಂತರ ಹೋರಾಟ
ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಲ್ಲಿ ಕನ್ನಡಿಗರ ನೇಮಕಾತಿಗಾಗಿ ರಾಜ್ಯಪಾಲರಿಗೆ ಹಕ್ಕೊತ್ತಾಯ ರೈಲ್ವೆ ಅನ್ಯಾಯದ ನೀತಿಗೆ ಅಧ್ಯಕ್ಷರಿಂದ ತಿರುಗು ಬಾಣ ರೈಲ್ವೇ ಇಲಾಖೆಯ ಪರೀಕ್ಷೆಯನ್ನು ಇನ್ನು ಕನ್ನಡದಲ್ಲೆ ತೆಗೆದುಕೊಳ್ಳ ಬೊಹುದು ಎಂದು ಭಾರತ ಸರ್ಕಾರ ಹೇಳಿದೆ. ಕರ್ನಾಟಕ ರಕ್ಷಣಾ ವೇದಿಕೆ ೨ ವರುಷಗಳಿಂದ ಸತತವಾಗಿ ನಡೆಸಿಕೊಂದು ಬಂದ ಹೋರಾಟಕ್ಕೆ ಸಿಕ್ಕಿರುವ ಜಯ ಇದಾಗಿದೆ. ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ
|